ಆರ್ಎಸ್ಎಸ್ನ ರುದ್ರೇಶ್ ಕೊಲೆ ಆರೋಪಿಗಳು ಯಾವ ಸಂಘಟನೆ ಸೇರಿದವರು ಗೊತ್ತಾ..?
ರುದ್ರೇಶ್ ಕೊಲೆ ಆರೋಪಿಗಳೆಲ್ಲ SDPI(ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಎಂಬ ರಾಜಕೀಯ ಪಕ್ಷದ ಸದಸ್ಯರು. SDPI ಕೇರಳದಲ್ಲಿ ಪ್ರಭಾವಿ ಪ್ರಾದೇಶಿಕ ಪಕ್ಷವಾಗಿದ್ದು, ಮಂಗಳೂರು,ಬೆಂಗಳೂರು, ಮೈಸೂರು, ಮಡಿಕೇರಿಯಲ್ಲೂ ಪಕ್ಷದ ಘಟಕಗಳಿವೆ.
ಬೆಂಗಳೂರು(ಅ.27): ಅಂತೂ ಇಂತೂ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನವೀದ್, ನಜೀರ್ ಮತ್ತು ಮಜರ್ ಬಂಧಿತ ಆರೋಪಿಗಳು. ಕೊಲೆಯ ಪ್ರಮುಖ ಸೂತ್ರಧಾರ, 4ನೇ ಆರೋಪಿಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ. ರುದ್ರೇಶ್ ಕೊಲೆಗೆ ಸೈದ್ಧಾಂತಿಕ ಕಾರಣವೇ ಹೊರತು ವೈಯಕ್ತಿಕ ದ್ವೇಷವಲ್ಲ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
CLICK HERE.. ನನ್ನ ಗಂಡನಿಗೆ ಬಂದ ಸ್ಥಿತಿ ಬೇರಾರಿಗೂ ಬರಬಾರದು - ರುದ್ರೇಶ್ ಪತ್ನಿ
ರುದ್ರೇಶ್ ಕೊಲೆ ಆರೋಪಿಗಳೆಲ್ಲ SDPI(ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಎಂಬ ರಾಜಕೀಯ ಪಕ್ಷದ ಸದಸ್ಯರು. SDPI ಕೇರಳದಲ್ಲಿ ಪ್ರಭಾವಿ ಪ್ರಾದೇಶಿಕ ಪಕ್ಷವಾಗಿದ್ದು, ಮಂಗಳೂರು,ಬೆಂಗಳೂರು, ಮೈಸೂರು, ಮಡಿಕೇರಿಯಲ್ಲೂ ಪಕ್ಷದ ಘಟಕಗಳಿವೆ.